ಹಾವೇರಿಯಲ್ಲಿ ವೈಜ್ಞಾನಿಕ ಕಾಲುವೆ ನಿರ್ಮಾಣ ಕಾಮಗಾರಿಯಿಂದ ನದಿಗೆ ಸೇರಬೇಕಾದ ನೀರು ರೈತರ ಜಮೀನಿಗೆ ನುಗ್ಗಿ ಬೆಳೆ ಹಾಳಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಜಮೀನಲ್ಲೇ ಕುಳಿತು ಆಕ್ರೋಶ ಹೊರಹಾಕಿದ್ರು. ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿಯ ಜಲಾವೃತಗೊಂಡ ಜಮೀನಿನಲ್ಲೇ ಕುಳಿತು ಧರಣಿ ನಡೆಸಿದರು. ರೈತರ ಜಮೀನಿಗೆ ನೀರು ನುಗ್ಗಿದರಿಂದ ಸೋಯಾಬಿನ್ ಬೆಳೆ, ಮೆಕ್ಕೆಜೋಳ, ಹತ್ತಿ ಬೆಳೆ ಸೇರಿದಂತೆ 100ಕ್ಕೂ ಅಧಿಕ ಎಕರೆ ಬೆಳೆ ಹಾನಿಯಾಗಿದೆ. ಈ ಕಾಮಗಾರಿ ಸರಿಪಡಿಸಬೇಕು ಅಂತಾ ಆಗ್ರಹಿಸಿದ್ರು.
#publictv #haveri #cropdamage