ಕಳೆದ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಏರ್ಪೋರ್ಟ್ನ ಟೋಲ್ ಬಳಿ ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್ನನ್ನು ಮಾದಕವಸ್ತುಗಳ ಜೊತೆಯಲ್ಲೇ ಎನ್ಸಿಬಿ ಬಂಧಿಸಿತ್ತು. ಶ್ರೀನಿವಾಸ್ ಮತ್ತು ಈತನ ಕೆಲಸಗಾರ ಗಿರೀಶ್ ಇಬ್ಬರನ್ನು ಬಂಧಿಸಿರುವ ಎನ್ಸಿಬಿ ವಿಚಾರಣೆ ನಡೆಸ್ತಿದೆ. ವಿಚಾರಣೆ ವೇಳೆ ಇಬ್ಬರು ಬಾಯ್ಬಿಟ್ಟ ಸತ್ಯ ಕೇಳಿ ಅಧಿಕಾರಿಗಳೇ ದಂಗಾಗಿದ್ದಾರೆ. ನಾನು ಗೋವಾದಲ್ಲಿ ಲಿಕ್ವಿಡ್ ರೂಪದ ಕೊಕೇನ್ ಖರೀದಿ ಮಾಡ್ತೀನಿ.. ನೈಜಿರಿಯಾ ಮತ್ತು ರಷ್ಯಾದ ಪೆಡ್ಲರ್ಗಳಿಂದ ಖರೀದಿ ಮಾಡಿ ನನ್ನ ಬೆಂಗಳೂರಿನ ಗೆಸ್ಟ್ ಹೌಸ್ನಲ್ಲಿ ಶೇಖರಣೆ ಮಾಡಿ ಇಟ್ಟಿರುತ್ತೇನೆ. 2-3 ವಾರದ ಹಿಂದೆ ಗೋವಾಗೆ ಹೋಗಿದ್ದಾಗ 2 ಗ್ರಾಂ ಕೊಕೇನ್ ಖರೀದಿಸಿದ್ದೆ. ನÁನು ನಿತ್ಯ ಕೊಕೇನ್ ಬಿಟ್ಟರೆ ಬೇರೆ ಯಾವುದೇ ಡ್ರಗ್ಸ್ ತೆಗೆದುಕೊಳ್ತಾ ಇರ್ಲಿಲ್ಲ. ಕೆಲಸಗಾರ ಗಿರೀಶ್ ಲಿಕ್ವಿಡ್ ರೂಪದಲ್ಲಿ ಇದ್ದ ಡ್ರಗ್ಸ್ ಅನ್ನು ಪೌಡರ್ ಮಾಡಿಕೊಡ್ತಿದ್ದ. ಅದನ್ನು ನಾನು ಮೂಗಿನ ಮೂಲಕ ಸೇವನೆ ಮಾಡ್ತಿದ್ದೆ. ದಿನಾ ಡ್ರಗ್ಸ್ ತೆಗೆದುಕೊಳ್ಳದೇ ಇರೋಕೆ ಆಗ್ತಿರಲಿಲ್ಲ ಎಂದು ಶ್ರೀನಿವಾಸ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇನ್ನು ಲಿಕ್ವಿಡ್ ಡ್ರಗ್ಸ್ ಅನ್ನು ಮೈಕ್ರೊ ವೇವ್ ಅಲ್ಲಿ 1.5 ನಿಮಿಷ ಇಟ್ಟು ಪೌಡರ್ ಮಾಡಿ ಪ್ಯಾಕೇಟ್ಗೆ ಹಾಕಿ ಕೊಡ್ತಿದ್ದೆ. ನಿತ್ಯ 2 ಪ್ಯಾಕೆಟ್ ಡ್ರಗ್ಸ್ ಕೊಡ್ತಿದ್ದೆ.. ಕಳೆದ 6 ತಿಂಗಳಿಂದ ನಾನೇ ಕೊಡ್ತಿರೋದು ಎಂದಿದ್ದಾನೆ. ಸದ್ಯ ಆರೋಪಿಗಳ ಹೇಳಿಕೆಯಿಂದ ಡ್ರಗ್ಸ್ ದಂಧೆ ತನಿಖೆಯನ್ನು ಎನ್ಸಿಬಿ ಚುರುಕುಗೊಳಿಸಿದೆ.
#HRRanganath #NewsCafe #PublicTV