Muslim Miscreants Attack Former MLC Bhanu Prakash's Son Car In Shivamogga

Public TV 2022-05-08

Views 5

Muslim Miscreants Attack Former MLC Bhanu Prakash's Son Car In Shivamogga

ಹಿಂದೂ ಯುವಕ ಹರ್ಷನ ಹತ್ಯೆಯಾಗಿ ೩ ತಿಂಗಳು ಕಳೀತಾ ಬಂದ್ರೂ ಮಲೆನಾಡು ಜಿಲ್ಲೆಯಲ್ಲಿ ದ್ವೇಷದ ಜ್ವಾಲೆ ಕಡಿಮೆಯಾಗಿಲ್ಲ. ಅಲ್ಲಲ್ಲಿ ದ್ವೇಷದ ಜ್ವಾಲೆ ಹೊಗೆಯಾಡುತ್ತಲೇ ಇದೆ. ಆ ಒಂದು ಘಟನೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಹೌದು, ಶಿವಮೊಗ್ಗದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ದಾಳಿ ಪ್ರಕರಣ ಮಲೆನಾಡಿಗರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಶಿವಮೊಗ್ಗ ನಗರದ ಸೂಳೆಬೈಲು ಸಮೀಪ ಬಿಜೆಪಿ ಮುಖಂಡ ಮತ್ತು ಮಾಜಿ ಎಂಎಲ್‌ಸಿ ಭಾನುಪ್ರಕಾಶ್ ಪುತ್ರನ ಕಾರಿನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರ, ಕಲ್ಲುಗಳಿಂದ ದಾಳಿ ನಡೆಸಿದ್ರು.

ಕಾರಿನ ಗಾಜುಗಳನ್ನು ಸಂಪೂರ್ಣ ಜಖಂಗೊಳಿಸಿ ಎಸ್ಕೇಪ್ ಆಗಿದ್ರು. ಘಟನೆ ನಡೀತಿದ್ದಂತೆ ಖುದ್ದು ಫೀಲ್ಡಿಗಿಳಿದ ಎಸ್‌ಪಿ ಲಕ್ಷ್ಮಿಪ್ರಸಾದ್ ಸಂಘರ್ಷ ಉಂಟಾಗದಂತೆ ಕ್ರಮವಹಿಸಿದ್ರು. ಘಟನೆ ನಡೆದು ೨೪ ಗಂಟೆ ಒಳಗೆ ದಾಳಿ ಮಾಡಿದ್ದ ಮೂವರ ಪೈಕಿ ಅಜ್ಗರ್ ಅಲಿ ಎಂಬಾತನನ್ನು ಬಂಧಿಸಿ ಲಾಕಪ್‌ಗೆ ತಳ್ಳಿದ್ದಾರೆ. ಬಂಧಿ ಅಜ್ಗರ್ ಅಲಿ ಗ್ಯಾಂಗ್ ಈ ಹಿಂದೆ ಗಾಂಜಾ ಕೇಸ್‌ನಲ್ಲಿ ಅರೆಸ್ಟ್ ಆಗಿತ್ತು.

ಇನ್ನು ದಾಳಿಗೊಳಗಾದ ಕಾರಿನಲ್ಲಿ ತಾವು ಇರಲಿಲ್ಲ ಅಂತ ಮಾಜಿ ಎಂಎಲ್‌ಸಿ ಭಾನುಪ್ರಕಾಶ್ ಪುತ್ರ ಹರಿಕೃಷ್ಣ ಸ್ಪಷ್ಟಪಡಿಸಿದ್ದು. ಪದೇ ಪದೇ ಹಿಂದೂಗಳ ಮೇಲೆ ಹಲ್ಲೆಯಾದರೆ ಹೇಗೆ ಅಂತ ಪ್ರಶ್ನಿಸಿದ್ದಾರೆ.


ಇನ್ನು ಘಟನೆ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು.. ಹರ್ಷನ ಕೊಲೆ ನಂತರ ವಾರಕ್ಕೊಂದು, ಎರಡು ಈ ರೀತಿಯ ಘಟನೆಗಳು ನಡೀತಿದೆ. ಮತಾಂಧತೆ ಹಿನ್ನೆಲೆಯಲ್ಲಿ ಇದು ನಡೆಯುತ್ತಿದೆ ಎಂದಿದ್ದಾರೆ.


ಸದ್ಯ ಘಟನೆ ಬಳಿಕ ಶಿವಮೊಗ್ಗ ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಮತ್ತಷ್ಟು ಹೆಚ್ಚಿನ ಬಂದೋಬಸ್ತ್ ನಿಯೋಜಿಸಿದ್ದಾರೆ.


#PublicTV #Shivamogga

Share This Video


Download

  
Report form